(ಚಿತ್ರ: ಅಮಿತಾ ಪುರಾಣಿಕ್)
ಮರಕತದ ನೆಲದಲ್ಲಿ ಹೊನ್ನ ಧೂಳಿಯ ಚೆಲ್ಲಿ
ಮುಗಿಲದೆರೆ ಮರೆಯಲ್ಲಿ ನಗುವ ಪ್ರಕೃತಿ|
ಘನನೀಲ ಕಾರ್ಮೋಡ ಕವಿದಿರುವ ಬಾನಿಗದೊ
ಚೇತನವ ನೀಡುತಿಹ ಪಸುರ ಸಂಗಾತಿ||
ಮಳೆಯ ಹನಿಯಿನಿಯನಂ ಮೌನದಲಿ ಕಾದಿರ್ದ
ಭೂರಮಣಿಗಲರರಳಿ ರೋಮಾಂಚನ|
ದೂರದಲಿ ಕಂಡವಳೆ ಸ್ವಾಗತಿಸೆ ಲಗುಬಗೆಯಿಂ
ಹಾಸಿಹಳೆ ಅರಿಶಿಣದ ಜಂಬುಖಾನ?||
- ಉಮಾಶಂಕರ್ ಕೆ
No comments:
Post a Comment