ಅಲ್ಲಿ ಹೊನ್ನಿನ ಬಟ್ಟೆಯೊಳ್ಮನವಾಡಲಾಟಿಪುದೇತಕೋ
ಅಲ್ಲಿ ಬೆಂಕಿಯುಗುಳ್ವ ಸೂರ್ಯನ ಮುಟ್ಟಲೇತಕೆ ಪಾರ್ವುದೋ|
ಕಲ್ಲಿನಂತೆಯೆ ಶಾಂತಿಯಿಂ ಕರಮೊಪ್ಪದೇತಕೆ ಪಾಳ್ಮನಂ
ಬಲ್ಲೆಯೇಂ ತವಶೌರ್ಯ ಕೇಳ್ವುದು ಬಲ್ಲ ಬುದ್ಧಿಯ ಸಖ್ಯಮಂ||
(ಮಲ್ಲಿಕಾಮಾಲಾವೃತ್ತ)
- ಉಮಾಶಂಕರ ಕೇಳತ್ತಾಯ
ಆ ಬಂಗಾರದ ಬಣ್ಣದ ಹಾದಿಯಲ್ಲಿ ಮನಸ್ಸೇಕೆ ಆಡಲು ಬಯಸುತ್ತಿದೆಯೋ!
ಆ ಬೆಂಕಿಯ ಉಂಡೆಯಾಗಿರುವ ಸೂರ್ಯನನ್ನುಮುಟ್ಟಲು ಮನಸ್ಸೇಕೆ ಹಾರುತ್ತಿದೆಯೋ!
ಈ ಹಾಳು ಮನಸ್ಸೇಕೆ ಕಲ್ಲಿನಂತೆ ಮೌನವಾಗಿ ಶಾಂತಿಯಿಂದ ಕುಳಿತುಕೊಳ್ಳುವುದಿಲ್ಲ?
ಮನಸ್ಸೇ.. ನಿನ್ನ ಶೌರ್ಯವು ವಿವೇಕದ ಜತೆಯನ್ನು ಕೇಳುತ್ತದೆ.
No comments:
Post a Comment