ಸಂಸ್ಕೃತ ಶ್ಲೋಕವೊಂದನ್ನಾಧರಿಸಿ ಬರೆದ ಪದ್ಯ, ಸಾಂಗತ್ಯದಲ್ಲಿ:
ನಿದ್ರಿsಪಳ್ ಲಕ್ಷ್ಮಿsಯುs ಕಂಜsದೊಳ್ ಹರನೋ ಹಿs-
ಮಾದ್ರಿsಯೊಳ್ ಹರಿಯುs ಪಾಲ್ಗಡಲೊಳ್|
ನಿದ್ರಿsಪರ್ ದೇವರ್ಕsಳಾದsರೇಂ ತಿಗಣೆsಯುs-
ಪದ್ರsವs ಸಹಿಪsರೇನಕಟಾ!||
(ಲಕ್ಷ್ಮಿಯು ಕಮಲದಲ್ಲೂ, ಶಿವನು ಹಿಮಾಲಯದಲ್ಲೂ ಮತ್ತು ವಿಷ್ಣುವು ಹಾಲಿನ ಸಮುದ್ರದಲ್ಲೂ ನಿದ್ರಿಸುತ್ತಾರೆ. ಇವರೆಲ್ಲಾ ದೇವರಾದರೇನಂತೆ? ತಿಗಣೆಗಳ ಕಾಟವನ್ನು ಸಹಿಸಬಲ್ಲರೇ?)
(ಮೂಲ: ಕಮಲೇ ಕಮಲಾ ಶೇತೇ ಹರ: ಶೇತೇ ಹಿಮಾಲಯೇ|
ಕ್ಷೀರಾಬ್ಧೌ ಚ ಹರಿ: ಶೇತೇ ಮನ್ಯೇ ಮತ್ಕುಣ ಶಂಕಯಾ||
ಲಕ್ಷ್ಮಿಯು ಕಮಲದಲ್ಲೂ, ಶಿವನು ಹಿಮಾಲಯದಲ್ಲೂ ಮತ್ತು ವಿಷ್ಣುವು ಹಾಲಿನ ಸಮುದ್ರದಲ್ಲೂ ನಿದ್ರಿಸುತ್ತಾರೆ. ತಿಗಣೆಗಳ ಭಯವೇ ಇದಕ್ಕೆ ಕಾರಣವಿರಬೇಕು.)
- ಉಮಾಶಂಕರ್ ಕೆ
No comments:
Post a Comment