Tuesday, August 13, 2024
ಮಯೂರ ನೃತ್ಯ
ಕೊಂಚ ಪುಸ್ತಕದೋದು ಕೊಂಚ ಛಾಯಾಗ್ರಹಣ
ಕೊಂಚ ಸಂಗೀತವದು ಕೊಂಚ ಸಾಹಿತ್ಯ|
ಕೊಂಚ ಗಣಿತಾಸಕ್ತಿ ಮತ್ತಿಷ್ಟು ನೂತನತೆಗಿಂಚಷ್ಟು ತೆರೆದ ನಾನ್ ಉಮಾಶಂಕ್ರ||
ಅಷ್ಟಾವಧಾನದಲ್ಲಿ ಕೊಟ್ಟ ಆಶುಕವಿತೆಯ ವಸ್ತುಗಳು
ಕೊಂಚ ಪುಸ್ತಕದೋದು ಕೊಂಚ ಛಾಯಾಗ್ರಹಣ
ಕೊಂಚ ಸಂಗೀತವದು ಕೊಂಚ ಸಾಹಿತ್ಯ|
ಕೊಂಚ ಗಣಿತಾಸಕ್ತಿ ಮತ್ತಿಷ್ಟು ನೂತನತೆಗಿಂಚಷ್ಟು ತೆರೆದ ನಾನ್ ಉಮಾಶಂಕ್ರ||
Monday, June 10, 2024
ಆ ಬೈಗು..
ಬೈಗಿನ ಹೊತ್ತು... ಲಕ್ಷೋಪಲಕ್ಷವೃಕ್ಷಪತ್ರಗಳು ಮುಳುಗುವ ಸೂರ್ಯನ ಕೆಂಗಾಂತಿಯನ್ನು ಪ್ರತಿಫಲಿಸಿ ಆತನಿಗೆ ವಿದಾಯ ಹೇಳುತ್ತಿದ್ದವು. ತಮ್ಮ ಕೋಟ್ಯಂತರ ಹಸ್ತಗಳಿಂದ ಸೂರ್ಯನಿಗೆ ಸಾಯಂಕಾಲದ ಆರತಿಯನ್ನು ಎತ್ತುತ್ತಿದ್ದಂತೆ ಅವುಗಳು ಕಾಣಿಸುತ್ತಿದ್ದವು. ಕಾಡಿನ ಗಂಭೀರ ಮಹನ್ಮೌನವನ್ನು ಹೆಚ್ಚುಗೊಳಿಸುತ್ತಿದ್ದ ನಿಶಾಚರ ಹಕ್ಕಿಗಳ ಸದ್ದು ಗರ್ಭಗುಡಿಯ ನೀಲಾಂಜನದ ಮಂದಬೆಳಕಿನಲ್ಲಿ ಮೆಲುವಾಗಿ ಮಂತ್ರಪಠಿಸುತ್ತಿದ್ದ ಅರ್ಚಕರ ಧ್ವನಿಯಂತಿತ್ತು. ಸ್ವರ್ಣಾ ನಿಶ್ಶಬ್ದವಾಗಿ ಮನಸ್ಸನ್ನೆಲ್ಲಾ ಅರಿತವಳಂತೆ ಸಾಂತ್ವನ ನೀಡುವವಳಂತೆ ಹರಿಯುತ್ತಿದ್ದಳು. ನದಿಯ ಮೇಲೆ ಬಾಗಿದ್ದ ದಟ್ಟ ಎಲೆಗಳಿದ್ದ ವೃಕ್ಷಗಳು ಏನೋ ನಿಗೂಢತೆಯನ್ನು ಆ ಇಳಿಸಂಜೆಯ ನೀರವತೆಯಲ್ಲಿ ತಮ್ಮೊಳಗೆ ಘನೀಭವಿಸಿಕೊಂಡಂತೆ ಕಂಡುಬರುತ್ತಿದ್ದವು. ಏನೋ ಕಾತರಪೂರ್ಣ ಸ್ತಬ್ಧ ವಾತಾವರಣ... ಹೋಗಿ ಗೂಡಿಗೆ ಸೇರಿಕೊಳ್ಳುವ ಸಮಯ ಎಂದು ಕೋಟ್ಯಂತರ ವರ್ಷಗಳ ಹಿಂದಿನ ಮಾನವನಿಗೆ ನೀಡುತ್ತಿದ್ದ ಸೂಚನೆಯಂತೆ ನನಗೂ ಈಗ ಪ್ರಕೃತಿ ನೀಡುತ್ತಿದ್ದಳು. ಅವಳಿಗೆ ಅದೆಂತಹ ಪ್ರಚಂಡ ಶಕ್ತಿ..! ತನ್ನ ಪ್ರಶಾಂತತೆಯಿಂದ ಮನುಷ್ಯನ ಎಲ್ಲ ಚಿತ್ತವೃತ್ತಿಗಳನ್ನೂ ಕೆಲಕಾಲ ಶಮನಗೊಳಿಸುವ ಶಾಂತ, ದೃಢ ಶಕ್ತಿ..! ಸಮಸ್ತ ವಿಶ್ವವನ್ನೂ ಶಾಂತಿಯ ಚಿಪ್ಪಿನೊಳಗೆ ತೂರಿಸಿಬಿಡುವ ಶಕ್ತಿ..! ಮನಸ್ಸಿನಲ್ಲಿ ಅದೇನೋ ಉನ್ನತಭಾವವನ್ನು ತುಂಬಿ ವಿಶ್ವವ್ಯಾಪೀ ಸರ್ವಶಕ್ತನಿಗೆ ವಿನಮ್ರವಾಗಿ ಪ್ರಾಂಜಲತೆಯಿಂದ ಮಣಿದು, ಕೃತಜ್ಞತೆಯಿಂದ ನಮಸ್ಕರಿಸಿಬಿಡಬೇಕೆನ್ನುವ ಭಾವವನ್ನುಕ್ಕಿಸುವ ಪವಿತ್ರ ಶಕ್ತಿ..! ಅಲ್ಲಿ ಮಾತಿಗೆ ಮನಸಿಲ್ಲ. ಮನಸ್ಸೂ ನಿಶ್ಶಬ್ದವಾಗಿ ಕುಳಿತುಬಿಟ್ಟಿತ್ತು. ಏನೋ ಅರಿಯದ ಸಂತೃಪ್ತಿ ಮನಸ್ಸನ್ನೆಲ್ಲಾ ಆವರಿಸಿತು. ಆ ಆಹ್ಲಾದಕರ ಭಾರವನ್ನು ಹೊತ್ತು ಮೆಲ್ಲ ಮೆಲ್ಲನೆ ನಮ್ಮ ಗೂಡಿನತ್ತ ನಡೆದೆವು.
ಕೊಂಚ ಪುಸ್ತಕದೋದು ಕೊಂಚ ಛಾಯಾಗ್ರಹಣ
ಕೊಂಚ ಸಂಗೀತವದು ಕೊಂಚ ಸಾಹಿತ್ಯ|
ಕೊಂಚ ಗಣಿತಾಸಕ್ತಿ ಮತ್ತಿಷ್ಟು ನೂತನತೆಗಿಂಚಷ್ಟು ತೆರೆದ ನಾನ್ ಉಮಾಶಂಕ್ರ||
ಅಷ್ಟದಳಪದ್ಮಬಂಧ
ಕೊಂಚ ಪುಸ್ತಕದೋದು ಕೊಂಚ ಛಾಯಾಗ್ರಹಣ
ಕೊಂಚ ಸಂಗೀತವದು ಕೊಂಚ ಸಾಹಿತ್ಯ|
ಕೊಂಚ ಗಣಿತಾಸಕ್ತಿ ಮತ್ತಿಷ್ಟು ನೂತನತೆಗಿಂಚಷ್ಟು ತೆರೆದ ನಾನ್ ಉಮಾಶಂಕ್ರ||
Saturday, May 4, 2024
ಯಕ್ಷಗಾನ
ಸಣ್ಣವರಿದ್ದಾಗ ಯಕ್ಷಗಾನ ನೋಡುವ ಹುಚ್ಚು ಹತ್ತಿಸಿಕೊಳ್ಳದವರು ಯಾರಿದ್ದಾರೆ ಹೇಳಿ? ನಾನಂತೂ ಯಕ್ಷಗಾನ ಎಲ್ಲೇ ನಡೆಯಲಿ; ಅಲ್ಲಿಗೆ ನನ್ನನ್ನು ಕರೆದೊಯ್ಯಲು ಅಪ್ಪನನ್ನು ಕಾಡಿಸಿ, ಪೀಡಿಸಿ ಅವರಿಗೆ ದುಂಬಾಲು ಬೀಳುತ್ತಿದ್ದೆ. ಹೋಗುವ ಹಪಹಪಿಯಲ್ಲಿರುತ್ತಿದ್ದ ನನಗೆ ಅವರು ಹೊರಡಲು ಸಿದ್ಧರಾಗುವುದು ಯಾವತ್ತೂ ವಿಳಂಬವಾದಂತೆಯೇ ಅನ್ನಿಸುತ್ತಿತ್ತು!. ನಡೆದುಕೊಂಡೋ, ಸ್ಕೂಟರಿನಲ್ಲೋ ಹೋಗುತ್ತಿದ್ದೆವು. ಯಕ್ಷಗಾನ ಪ್ರದರ್ಶನದ ಸ್ಥಳ ಸಮೀಪಿಸುತ್ತಿದ್ದಂತೆಯೇ ಕೇಳುವ ಚೆಂಡೆ-ಮದ್ದಳೆಗಳ ಘೋಷಕ್ಕೆ ಕಾಲುಗಳು ತಕತಕ ಕುಣಿಯುವಂತಾಗಿ, ಹೆಚ್ಚು ಕಡಿಮೆ ಓಡುತ್ತಲೇ ನಡೆಯುತ್ತಿದ್ದೆ. ಈ ಅಪ್ಪ ಬೇಗ ಬೇಗ ಬರಬಾರದೇ ಎಂದೆನಿಸಿಬಿಡುತ್ತಿತ್ತು. ಆ ಸಮಯದಲ್ಲಿ ಅಪ್ಪನ ಪರಿಚಯಸ್ಥರು ಯಾರಾದರೂ ಸಿಕ್ಕಿ ಮಾತನಾಡಲು ತೊಡಗಿದರೆ ಸಿಟ್ಟು ನೆತ್ತಿಗಡರುತ್ತಿತ್ತು. ಅಪ್ಪನ ಕೈ ಹಿಡಿದು "ಹೋಗುವಾ...ಹೋಗುವಾ.." ಎಂದು ಎಳೆಯತೊಡಗುತ್ತಿದ್ದೆ.
ಗಂಡುಮೆಟ್ಟಿನ ನೆಲದ ಕಲೆಯಿದು
ಚೆಂಡೆಮದ್ದಳೆ ಘೋಷ ಕಲೆವುದು
ದಂಡಧರನೂ ನೋಡಬೆದರುವ ವೇಷವಿಲ್ಲಿಹುದು|
ಹಂಡೆಗಾತ್ರದ ಮುಕುಟವಿಟ್ಟಿಹ
ಮಂಡೆಯನು ತೂಗುತ್ತ ಕುಣಿಯುತ
ದುಂಡುದುಂಡನೆ ಬಿಡದೆ ಸುತ್ತುವ ಶೂರರಿಲ್ಲಿಹರು||
ಯಕ್ಷಗಾನದ ಸೊಬಗ ಬಣ್ಣಿಸೆ
ಲಕ್ಷ ಪದಗಳು ಸಾಕು ಎನಿಪವೆ
ದೀಕ್ಷೆಯಿಂದಲಿ ಕುಳಿತು ವೀಕ್ಷಿಸೆ ನಿಶೆಯ ತಂಪಿನಲಿ|
ದಕ್ಷ ಕಂಠದ ಭಾಗವತರಿರೆ
ಯಕ್ಷಧೀಂಗಿಣರಸಿಕಸಭಿಕನು
ಅಕ್ಷಿಯನು ಮುಚ್ಚಿಸದ ಕಲೆಗಿದೊ ಜಯತು ಕೇಳೆಂದ||
-ಉಮಾಶಂಕರ್ ಕೆ
ಕೊಂಚ ಪುಸ್ತಕದೋದು ಕೊಂಚ ಛಾಯಾಗ್ರಹಣ
ಕೊಂಚ ಸಂಗೀತವದು ಕೊಂಚ ಸಾಹಿತ್ಯ|
ಕೊಂಚ ಗಣಿತಾಸಕ್ತಿ ಮತ್ತಿಷ್ಟು ನೂತನತೆಗಿಂಚಷ್ಟು ತೆರೆದ ನಾನ್ ಉಮಾಶಂಕ್ರ||

